ನಾವು – ಬದಲಾವಣೆ

🌻ಎಂ ಶಾಂತಪ್ಪ ಬಳ್ಳಾರಿ🌻

 

*ನಾವು – ಬದಲಾವಣೆ*

 

* ಹೊಸ ವರ್ಷದಂದು ನನ್ನ ಜೀವನ ಬದಲಾಗುತ್ತದೆ ಎಂಬ ನಂಬಿಕೆ ಬಹುತೇಕ ಜನರಲ್ಲಿ ಇರುತ್ತದೆ. ಆದರೆ ಸುತ್ತಮುತ್ತೆಲ್ಲಾ ಹಳೆಯದೆಯೇ ಮುಂದುವರಿದರೆ, ಆ ಬದಲಾವಣೆ ಎಲ್ಲಿ ಸಂಭವಿಸುತ್ತದೆ? ಮಧ್ಯರಾತ್ರಿ 12 ಗಂಟೆಗೆ ದಿನ ಬದಲಾಗಿದೆಯೆನ್ನಬಹುದು, ಆದರೆ ಮನುಷ್ಯರ ಸಂಬಂಧಗಳಲ್ಲಿ, ಮನಸ್ಸುಗಳಲ್ಲಿ ಬದಲಾವಣೆ ಆಗದಿದ್ದರೆ, ಹೊಸ ವರ್ಷದಲ್ಲಿ ಏನು ಹೊಸತೆನಿದೆ?

 

* ನಿಜವಾದ ಬದಲಾವಣೆ ಹೊರಗಿನ ಬದಲಾವಣೆಯಿಂದ ಅಲ್ಲ, ನಿಮ್ಮ ಒಳಗಿನ ಯೋಚನೆಗಳಿಂದ ಆರಂಭವಾಗುತ್ತದೆ. ನೀವು ನಿಮ್ಮ ಯೋಚನೆಗಳನ್ನು ಶೇ.10 ರಷ್ಟು ಸುಧಾರಿಸಿದರೆ, ಮುಂದಿನ ತಿಂಗಳು ಈ ತಿಂಗಿಗಿಂತ ಶೇ.10 ಹೆಚ್ಚು ಯಶಸ್ಸು ಕಾಣಬಹುದು. ಈ ಯಶಸ್ಸಿಗೆ ಹೊಸ ವರ್ಷ ಕಾರಣವಾಗಿಲ್ಲ – ಬದಲಾವಣೆ ಬೇಕೆಂಬ ನಿಮ್ಮ ನಂಬಿಕೆಯಿಂದಲೇ ಅದು ಸಾಧ್ಯವಾಗುತ್ತದೆ.

 

*ಕೆಲಸದ ಬಗ್ಗೆ ನಮ್ಮ ದೃಷ್ಟಿಕೋನ*

 

* ನಾವು ಮಾಡುವ ಕೆಲಸವೇ ನಾವು ಎಷ್ಟರ ಮಟ್ಟಿಗೆ ಬೆಳೆಯುತ್ತೇವೆ ಎಂಬುದನ್ನು ನಿರ್ಧರಿಸದು, ಆದರೆ ನಾವು ಅದನ್ನು ಯಾವ ದೃಷ್ಟಿಕೋನದಿಂದ ನೋಡುತ್ತೇವೆ ಎಂಬುದು ಬಹಳ ಮುಖ್ಯ. ಒಂದೇ ರೀತಿಯ ಆನ್ಲೈನ್ ಕೆಲಸವನ್ನು ಕೆಲವರು ಪ್ರೀತಿಯಿಂದ ಮಾಡುತ್ತಾರೆ, ಇನ್ನು ಕೆಲವರು ಕೇವಲ ಹೊತ್ತು ಹಾಯಿಸಲು. ಕೆಲಸ ಒಂದೇ  ಆದರೆ ಕೆಲಸವನ್ನು ಹೃದಯದಿಂದ, ಶ್ರದ್ದೆಯಿಂದ ಮಾಡಿದರೆ, ಅದರಿಂದ ಸಿಗುವ ಫಲಿತಾಂಶ ವಿಶಿಷ್ಟವಾಗಿರುತ್ತದೆ. ನಿಜವಾಗಿ, "ಕಾಯಕವೇ ಕೈಲಾಸ" ಎನ್ನುವುದು ಇಲ್ಲಿ ಅರ್ಥಪೂರ್ಣವಾಗುತ್ತದೆ.

 

*ಮನಸ್ಸಿನ ದೃಷ್ಟಿಕೋನವೇ ಜಗತ್ತಿನ ರೂಪ*

 

* ನೀವು ಜಗತ್ತನ್ನು ಹೇಗೆ ನೋಡುತ್ತೀರಿ ಅನ್ನುವುದು, ನಿಮ್ಮ ಜೀವನಕ್ಕೆ ಹೇಗೆ ಪ್ರತಿಫಲಿಸುತ್ತದೆ ಎಂಬುದನ್ನು ತೀರ್ಮಾನಿಸುತ್ತದೆ. ಜಗತ್ತಿನಲ್ಲಿ ಎಲ್ಲರೂ ಒಳ್ಳೆಯವರೆಂದು ಭಾವಿಸಿದರೆ, ನಿಮ್ಮ ಸುತ್ತಲೂ ಸುಂದರತೆ ಕಾಣಸಿಗುತ್ತದೆ. ಆದರೆ ಎಲ್ಲರೂ ಮೋಸಗಾರರೆಂದು ಭಾವಿಸಿದರೆ, ಅದೇ ನಿಮ್ಮ ಅನುಭವ. ಜಗತ್ತಿನ ಸತ್ಯಕ್ಕಿಂತ, ನಿಮ್ಮ ದೃಷ್ಟಿಕೋನವೇ ನಿಮ್ಮ ಅನುಭವದ ಮೂಲ.

 

*ಆತ್ಮವಿಶ್ವಾಸ ಮತ್ತು ಸ್ವಯಂ ಗೌರವ*

 

* ನಿಮ್ಮ ಬಗ್ಗೆ ನಿಮಗೆ ಹೇಗಿರುವ ಭಾವನೆಯೇ ನಿಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಕೆಲವರು ತಮ್ಮೊಳಗಿನ ಸಾಮರ್ಥ್ಯವನ್ನು ತಾವೇ ನಿರಾಕರಿಸುತ್ತಾರೆ. ಈ ಕೀಳರಿಮೆ ಅವರನ್ನು ಹಿಂದೆ ತಳ್ಳುತ್ತದೆ. ಅದನ್ನು ದಾಟಿ ಮುನ್ನಡೆದು ಹೊರಬರುವ ಶಕ್ತಿ ಆತ್ಮವಿಶ್ವಾಸ. ನಿಮ್ಮ ಶಾರೀರಿಕ ರೂಪಕ್ಕಿಂತ ಮುಖ್ಯವಾದದ್ದು, ನಿಮ್ಮೊಳಗಿನ ಶುದ್ಧತೆ ಮತ್ತು ಶ್ರದ್ಧೆ. ನೀವು ಪ್ರೀತಿಸುವ, ನಂಬುವ ವ್ಯಕ್ತಿಯಾಗಿ ನೀವು ಮೊದಲಿಗೆ ನಿಲ್ಲಬೇಕು.

 

*ನಂಬಿಕೆಗಳ ತಳಹದಿಯಲ್ಲಿ ಹೊಸ ನಂಬಿಕೆ*

 

* ಧರ್ಮ, ದೇವರು ಎಂಬ ನಂಬಿಕೆಗಳು ನಮಗೆ ಬದುಕಿನಲ್ಲಿ ಸಹಾಯ ಮಾಡುತ್ತವೆ. ಆದರೆ ಅವುಗಳ ಜೊತೆಗೆ ಹೊಸ ನಂಬಿಕೆಯನ್ನು ಬೆಳೆಸಿಕೊಳ್ಳಿ – ಅದು ನಿಮ್ಮ ಮೇಲೆ ನಿಮ್ಮ ನಂಬಿಕೆಯಾಗಿದೆ. ಇದು ಜಂಭವಲ್ಲ; ಇದು ಆತ್ಮವಿಶ್ವಾಸ. ಇದು ನಿಮ್ಮ ಬೆಳವಣಿಗೆಗೆ ಮೊದಲ ಹೆಜ್ಜೆ.

 

*ಆಲೋಚನೆಗಳು → ಕಾರ್ಯರೂಪ*

 

* ಪ್ರತಿಯೊಬ್ಬರ ಮನಸ್ಸಿನಲ್ಲಿ ಉತ್ತಮ ಆಲೋಚನೆಗಳು ಇರುತ್ತವೆ. ಆದರೆ ಅವುಗಳನ್ನೆಲ್ಲಾ ತಲೆಯಲ್ಲೇ ಇಟ್ಟುಕೊಂಡರೆ ಪರಿವರ್ತನೆ ಸಂಭವಿಸುವುದಿಲ್ಲ. ಆಲೋಚನೆಗಳನ್ನು ಒಂದು ಒಂದು ಹೆಜ್ಜೆ ಹಾಕುತ್ತಾ ಕಾರ್ಯರೂಪಕ್ಕೆ ತರಬೇಕಾಗುತ್ತದೆ. ನೀವು ಈಜು ಬಾರದೆ ಸಮುದ್ರಕ್ಕೆ ಧುಮುಕಿದರೆ, ಅದು ಸಾಹಸವಲ್ಲ – ಆತ್ಮಘಾತ. ಆದರೆ ನೀವು ಪೂಲ್‌ನಲ್ಲಿ ಈಜು ಕಲಿತು ತಯಾರಿ ಮಾಡಿಕೊಂಡು ಸಮುದ್ರ ಪ್ರವೇಶಿಸಿದರೆ, ಅದು ಬದಲಾವಣೆ.

 

*ಅವಕಾಶ ಮತ್ತು ಸಿದ್ಧತೆ*

 

* ಅವಕಾಶಗಳು ನಿಮ್ಮ ಬಾಗಿಲಿಗೆ ಬರುವಾಗ, ನೀವು ಸಿದ್ಧರಾಗಿರಬೇಕು. ಇಲ್ಲದಿದ್ದರೆ, ಜೀವನ ಬದಲಾವಣೆಗೊಳ್ಳುವುದಿಲ್ಲ. ನೀವು ಇಷ್ಟಪಡುವ ಕ್ಷೇತ್ರಗಳಲ್ಲಿ ದಿನದಿಂದ ದಿನಕ್ಕೆ ಸಿದ್ಧತೆ ನಡೆಸಿ. ಅದು ನಿಮ್ಮ ಯಶಸ್ಸಿಗೆ ನಾಂದಿ ರೂಪವಾಗುತ್ತದೆ.

 

*ಅಂತಿಮವಾಗಿ* :

ಬದಲಾವಣೆ ಎಂಬುದು ದಾರಿಯ ಕೊನೆಯಲ್ಲೊಂದು ಗುರಿ ಅಲ್ಲ. ಅದು ಪ್ರತಿ ದಿನದ, ಪ್ರತಿದಿನ ನಮ್ಮೊಳಗಿನ ಹೊಸ ಯೋಚನೆಗಳ ಆಯ್ಕೆ. "ನಾವು – ಬದಲಾವಣೆ" ಎಂಬುದನ್ನು ನಾವೇ ಪ್ರಾರಂಭಿಸಬೇಕು. ಹೊಸ ವರ್ಷವೋ, ಹೊಸ ದಿನವೋ ಅಲ್ಲ – ನವೀನ ಯೋಚನೆಯೊಳಗಿನ ನಾವು ಬದಲಾವಣೆಯ ಮೂಲ.

 

*ಪರಸ್ಪರ ನಿರಂತರ*