ಹೊಟ್ಟೆಗಾಗಿ ಹೋರಾಟ

🌻ಎಂ  ಶಾಂತಪ್ಪ ಬಳ್ಳಾರಿ 🌻

 

*ಹೊಟ್ಟೆಗಾಗಿ ಹೋರಾಟ*

— ಮಾನವನ ಬದುಕಿನ ಪಯಣ

 

* ಹೊಟ್ಟೆಗಾಗಿ ಪ್ರಾರಂಭವಾಗುವ ಹೋರಾಟ, ಊಟಕ್ಕೋಸ್ಕರ ಒಂದೊಂದು ಹೆಜ್ಜೆ… ಅದರ ಜೊತೆಗೆ ಬಟ್ಟೆ, ಸೂರು, ನೀರು – ಅವಶ್ಯಕತೆಯಲಿ ನಲುಗಿ ಬಿಡುತ್ತದೆ ಮನುಷ್ಯ.

 

* ನಿದ್ದೆಗೆ ಊರೆ ಇಲ್ಲದ ರಾತ್ರಿಗಳು, ಸುರಕ್ಷೆಗೆ ಸಾಕಾಗದ ಬಾಗಿಲುಗಳು, ಉದ್ಯೋಗವಿಲ್ಲದ ಬಡಕಲ್ಲು ಹೊತ್ತು ಹಣದ ಹಸಿವಿಗೆ ತಲೆ ಬಾಗುವ ತೊಂದರೆಗಳು.

 

* ಆಸ್ತಿಯ ಕನಸು ಎತ್ತುವಾಗ ಪ್ರೀತಿ, ಸ್ನೇಹ, ಪ್ರೇಮ – ಎಲ್ಲವೂ ಒಂದು ಚಿಹ್ನೆಯಂತೆ, ಸಂಬಂಧಗಳು ಲೆಕ್ಕದ ಲೆಕ್ಕಗಳಾಗುತ್ತದೆ, ಸಾಧನೆಯ ಹೆಜ್ಜೆ ಬದಿಯಲ್ಲಿ ಸ್ವಾಭಿಮಾನ ಕುಣಿತದಾಟ!

 

* ಆತ್ಮವಿಶ್ವಾಸದ ಪಯಣದಲ್ಲಿ ಗೌರವದ ಬಲೆಯೆಡೆಗೆ ಓಡುವೇನು ಆರೋಗ್ಯ ಕಾಯಲು ಹೋರಾಡುವ ಕ್ರಿಯಾಶೀಲ ಬದುಕಿಗೆ ಎಷ್ಟೋ ಸವಾಲುಗಳು!

 

* ಮುಗ್ಧತೆ ಉಳಿಯುವುದೇ ಗಟ್ಟಿತನ? ಭಾವ ಸಂಬಂಧಗಳು ದುರ್ಬಲವೇ ಇಲ್ಲದೆ? ಯಶಸ್ಸು ಎಂಬ Goals ತಲುಪಿದರೂ, ತೃಪ್ತಿ ಆಗದ ಹೃದಯದ ಬಿಸಿಲು ಏನು ಹೇಳುತ್ತದೆ?

 

* ಸರಿ-ತಪ್ಪಿನ ನಡುವೆ ನಿತ್ಯದ ಯುದ್ಧ,ನೈತಿಕತೆಯ ನೆರಳಲ್ಲಿ ಬದುಕು ಬೆಳೆಯುತ್ತದೆ,ಜ್ಞಾನವೆಂಬ ಬೆಳಕು ಹಿಡಿದು ಸೃಜನಶೀಲತೆ ರೂಪಿಸುತ್ತದೆ ನವ ಚಿಂತನ.

 

ವಾಸ್ತವ ಎಷ್ಟು ಕಠಿಣವಾಗಲಿ,

ನೆಮ್ಮದಿ ಎಂಬ ಕನಸು ಎದೆಯೊಳಗೆ ಉಳಿಯುತ್ತದೆ,

ಒಟ್ಟು ಹೇಳಬೇಕೆಂದರೆ,

ಇದು ಹೊಟ್ಟೆಗಾಗಿ ಹೋರಾಟ ಮಾತ್ರವಲ್ಲ –

ಇದು ಬದುಕು ಸಾಗುವ ಸಾಹಸದ ಕಥೆ!

 

ಪರಸ್ಪರ ನಿರಂತರ