🌻ಎಂ ಶಾಂತಪ್ಪ ಬಳ್ಳಾರಿ 🌻
*ಹೊಟ್ಟೆಗಾಗಿ ಹೋರಾಟ*
— ಮಾನವನ ಬದುಕಿನ ಪಯಣ
* ಹೊಟ್ಟೆಗಾಗಿ ಪ್ರಾರಂಭವಾಗುವ ಹೋರಾಟ, ಊಟಕ್ಕೋಸ್ಕರ ಒಂದೊಂದು ಹೆಜ್ಜೆ… ಅದರ ಜೊತೆಗೆ ಬಟ್ಟೆ, ಸೂರು, ನೀರು – ಅವಶ್ಯಕತೆಯಲಿ ನಲುಗಿ ಬಿಡುತ್ತದೆ ಮನುಷ್ಯ.
* ನಿದ್ದೆಗೆ ಊರೆ ಇಲ್ಲದ ರಾತ್ರಿಗಳು, ಸುರಕ್ಷೆಗೆ ಸಾಕಾಗದ ಬಾಗಿಲುಗಳು, ಉದ್ಯೋಗವಿಲ್ಲದ ಬಡಕಲ್ಲು ಹೊತ್ತು ಹಣದ ಹಸಿವಿಗೆ ತಲೆ ಬಾಗುವ ತೊಂದರೆಗಳು.
* ಆಸ್ತಿಯ ಕನಸು ಎತ್ತುವಾಗ ಪ್ರೀತಿ, ಸ್ನೇಹ, ಪ್ರೇಮ – ಎಲ್ಲವೂ ಒಂದು ಚಿಹ್ನೆಯಂತೆ, ಸಂಬಂಧಗಳು ಲೆಕ್ಕದ ಲೆಕ್ಕಗಳಾಗುತ್ತದೆ, ಸಾಧನೆಯ ಹೆಜ್ಜೆ ಬದಿಯಲ್ಲಿ ಸ್ವಾಭಿಮಾನ ಕುಣಿತದಾಟ!
* ಆತ್ಮವಿಶ್ವಾಸದ ಪಯಣದಲ್ಲಿ ಗೌರವದ ಬಲೆಯೆಡೆಗೆ ಓಡುವೇನು ಆರೋಗ್ಯ ಕಾಯಲು ಹೋರಾಡುವ ಕ್ರಿಯಾಶೀಲ ಬದುಕಿಗೆ ಎಷ್ಟೋ ಸವಾಲುಗಳು!
* ಮುಗ್ಧತೆ ಉಳಿಯುವುದೇ ಗಟ್ಟಿತನ? ಭಾವ ಸಂಬಂಧಗಳು ದುರ್ಬಲವೇ ಇಲ್ಲದೆ? ಯಶಸ್ಸು ಎಂಬ Goals ತಲುಪಿದರೂ, ತೃಪ್ತಿ ಆಗದ ಹೃದಯದ ಬಿಸಿಲು ಏನು ಹೇಳುತ್ತದೆ?
* ಸರಿ-ತಪ್ಪಿನ ನಡುವೆ ನಿತ್ಯದ ಯುದ್ಧ,ನೈತಿಕತೆಯ ನೆರಳಲ್ಲಿ ಬದುಕು ಬೆಳೆಯುತ್ತದೆ,ಜ್ಞಾನವೆಂಬ ಬೆಳಕು ಹಿಡಿದು ಸೃಜನಶೀಲತೆ ರೂಪಿಸುತ್ತದೆ ನವ ಚಿಂತನ.
ವಾಸ್ತವ ಎಷ್ಟು ಕಠಿಣವಾಗಲಿ,
ನೆಮ್ಮದಿ ಎಂಬ ಕನಸು ಎದೆಯೊಳಗೆ ಉಳಿಯುತ್ತದೆ,
ಒಟ್ಟು ಹೇಳಬೇಕೆಂದರೆ,
ಇದು ಹೊಟ್ಟೆಗಾಗಿ ಹೋರಾಟ ಮಾತ್ರವಲ್ಲ –
ಇದು ಬದುಕು ಸಾಗುವ ಸಾಹಸದ ಕಥೆ!
ಪರಸ್ಪರ ನಿರಂತರ