ಪರಸ್ಪರ ಎಂಬುದು ಸಾಮಾನ್ಯವಾದ ಸಹಕಾರ ಅಥವಾ ವಿನಿಮಯದ ಬಗ್ಗೆ ಮಾತ್ರವಲ್ಲ; ಇದು ಮನುಷ್ಯರ ನಡುವೆ ಸಂಬಂಧ, ಪರಸ್ಪರ ನಿರ್ಭರತೆ, ಮತ್ತು ಸಾಮೂಹಿಕ ಅಭಿವೃದ್ಧಿಯ ದಾರಿಯನ್ನು ಚಿತ್ತಗಟ್ಟುವ ಒಂದು ಪರಿಕಲ್ಪನೆ. ಪರಸ್ಪರದ ದೃಷ್ಟಿಕೋನವು ಸಮುದಾಯವನ್ನು ಬೆಳೆಸಲು, ನೈತಿಕ ಮೌಲ್ಯಗಳನ್ನು ಉತ್ತೇಜಿಸಲು ಮತ್ತು ನ್ಯಾಯಸಂಗತತೆಯನ್ನು ಸೃಷ್ಟಿಸಲು ಶ್ರೇಷ್ಠವಾದ ದೃಷ್ಟಿಕೋನವನ್ನು ಹೊಂದಿದೆ.
ಪರಸ್ಪರದ ಗುರಿ ಮಾನವೀಯ ಮೌಲ್ಯಗಳ ಬೆಳವಣಿಗೆ, ಸಹಭಾಗಿತ್ವದ ಶಕ್ತಿಕರಣ, ಮತ್ತು ಸಮಗ್ರ ಸಮುದಾಯದ ಶ್ರೇಯಸ್ಸಿಗೆ ಸಂಕೇತವಾಗಿದೆ. ಇದು "ನಾವು ಒಟ್ಟಾಗಿ ಬೆಳೆದಾಗ ಮಾತ್ರ ನಾವೊಂದು ಶ್ರೇಷ್ಠ ಸಮಾಜವನ್ನು ನಿರ್ಮಾಣ ಮಾಡಬಹುದು" ಎಂಬ ತತ್ವದ ಮೇಲೆ ಪರಸ್ಪರ ಆಧಾರಿತವಾಗಿದೆ.
ಸೇವಾ ಮನೋಭಾವ, ಸಮಾನ ಮನಸ್ಥಿತಿ, ಮತ್ತು ಮಾನವೀಯತೆ ಹೊಂದಿರುವ ಪರಸ್ಪರ ಸಮೂಹವು ಸೇವಾ ಮನೋಭಾವ, ಸಮಾನ ಮನೋಭಾವ ಮತ್ತು ಮಾನವೀಯತೆಯನ್ನು ತನ್ನ ಮುಖ್ಯ ತತ್ವಗಳಾಗಿ ಸ್ವೀಕರಿಸಿ, ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತದೆ. ಈ ಮೌಲ್ಯಗಳು ಎಲ್ಲರೊಂದಿಗೂ ಸಮಾನತೆ, ಸಹಕಾರ, ಮತ್ತು ಸಂವೇದನಾಶೀಲತೆಯನ್ನು ಬೆಳೆಸಲು ಸಹಾಯ ಮಾಡುತ್ತವೆ
ಸಮಾಜದ ಎಲ್ಲ ವರ್ಗಗಳ ಜನರನ್ನು ಒಗ್ಗೂಡಿಸಿ, ತಾರತಮ್ಯವಿಲ್ಲದ ಶ್ರೇಯಸ್ಸನ್ನು ಒದಗಿಸಲು ಸಹಾಯ ಮಾಡುತ್ತದೆ. ಸೇವಾ ಮನೋಭಾವ, ಸಮಾನತೆ, ಮತ್ತು ಮಾನವೀಯತೆಯ ಮೂಲಕ ದ್ವೇಷ ಮತ್ತು ವೈಷಮ್ಯವನ್ನು ದೂರ ಮಾಡುತ್ತದೆ. ಶ್ರೇಷ್ಠ ವ್ಯಕ್ತಿತ್ವವನ್ನು ಹಾಗೂ ದಕ್ಷ ಸಮುದಾಯವನ್ನು ರೂಪಿಸಲು ಸಾಧ್ಯವಾಗುತ್ತದೆ. ಈ ಮೌಲ್ಯಗಳು ಪರಸ್ಪರ ಸಮೂಹವನ್ನು ಬಲಶಾಲಿ, ಪ್ರಾಮಾಣಿಕ, ಮತ್ತು ಸಹಜ ಬದುಕಿಗೆ ಪೂರಕವಾಗುವಂತೆ ಮಾಡುತ್ತವೆ.
ನಮ್ಮಿಂದ-ನಮಗಾಗಿ ಎಂಬ ತತ್ತ್ವದ ಆಶಯವನ್ನು ಹೊತ್ತು ಸಾಗುತ್ತಿರುವ ಪರಸ್ಪರ ಸಮೂಹವು ಸಮಾನ ಮನಸ್ಕರ ಮತ್ತು ಸೇವಾ ಮನೋಭಾವದಿಂದ ಸಬಲೀಕರಣದ ದಾರಿಗೆ ಕೊಂಡೊಯ್ಯಲು ಬದ್ಧವಾಗಿದೆ. ಈ ಸಮೂಹವು ವ್ಯಕ್ತಿಯ ಸ್ವಾವಲಂಬನೆ ಮತ್ತು ಮಾನವೀಯತೆಯನ್ನು ತನ್ನ ಕೇಂದ್ರ ಬಿಂದುವಾಗಿಟ್ಟುಕೊಂಡು, ಎಲ್ಲರಿಗೂ ಸಮಾನ ಅವಕಾಶ ಮತ್ತು ಸಹಕಾರದ ವೆದಿಕೆಯನ್ನು ಒದಗಿಸಲು ಶ್ರಮಿಸುತ್ತಿದೆ.
ಸಮುದಾಯದ ಎಲ್ಲಾ ಸದಸ್ಯರಿಗೆ ಸ್ವಾವಲಂಬನೆಯ ಮನೋಭಾವ ಬೆಳೆಸುವುದು. ಆರ್ಥಿಕ, ಸಾಮಾಜಿಕ, ಮತ್ತು ಮಾನಸಿಕ ಸ್ವಾತಂತ್ರ್ಯದ ದಿಕ್ಕಿನಲ್ಲಿ ಕಾರ್ಯೋನ್ಮುಖವಾಗಿರುವ ದಾರಿಗಳನ್ನು ಅಳವಡಿಸಿಕೊಳ್ಳುವುದು. ಪರಿಸರ ಜಾಗೃತಿ ಮತ್ತು ಸಾಮಾಜಿಕ ಸಾಮರಸ್ಯವನ್ನು ಹುರಿದುಂಬಿಸುವ ಕಾರ್ಯಪ್ರವೃತ್ತಿಗಳನ್ನು ಪ್ರೋತ್ಸಾಹಿಸುವುದು. "ನಮ್ಮಿಂದ ನಮಗಾಗಿ" ಎಂಬ ನಿಲುವಿನಿಂದ ಸಬಲೀಕರಣಗೊಳ್ಳುವ ಈ ಪಯಣವು, ಶೋಷಿತರ ನ್ಯಾಯ, ಸಮಾನತೆ, ಮತ್ತು ಸ್ವಾಯತ್ತತೆಯ ದಿಕ್ಕಿನಲ್ಲಿ ಶ್ರೇಷ್ಠ ಮಾದರಿಯಾಗಿ ಪರಿಣಮಿಸುತ್ತಿದೆ. ಇದು ನಾನಾ ರೀತಿಯಲ್ಲಿ ಹಿನ್ನಡೆಯುಳ್ಳವರಿಗಾಗಿ ಹೊಸ ದಾರಿಗಳನ್ನು ತೋರುವ ಪ್ರಯತ್ನವಾಗಿದ್ದು, ಸಮಾಜದಲ್ಲಿ ಬದಲಾವಣೆಯ ಮೆಟ್ಟಿಲುಗಳನ್ನು ನಿಮರ್ಮಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತದೆ. ಪರಸ್ಪರ ಸಮೂಹವು "ನಮ್ಮಿಂದ ನಮಗಾಗಿ ಮಾನವೀಯತೆಯೇ ಮೊದಲ ಆದ್ಯತೆ" ಎಂಬ ತತ್ವದೊಂದಿಗೆ ಬಡವ-ಬಲ್ಲಿದ ಎಂಬ ಭೇದ ಭಾವವಿಲ್ಲದೆ, ಮಾನವೀಯತೆ ನೋಟದ ಜೊತೆಗೆ ಸೇವಾ ಮನೋಭಾವದ ಸಮಾನ-ಮನಸ್ಥಿತಿವಂತವರ ಶ್ರಮದಿಂದಲೇ ಆಕರ್ಷತೆಯನ್ನು ಸೃಷ್ಟಿಸುವ ಮಹಾಸೇತುವೆ. ಸಮಾಜದ ಬದಲಾವಣೆಯ ಯಂತ್ರವಾಗಿ ಇದು ಎಲ್ಲರ ಪಾಲಿಗೆ ಜೀವನದ ಹೊಸ ಆಯಾಮಗಳನ್ನು ತೆರೆದಿಡುತ್ತಿದೆ.
ಮಾನವೀಯತೆ, ಸೇವಾ ಮನೋಭಾವ, ಮತ್ತು ಸಮಾನ ಮನೋಭಾವ ಹೊಂದಿರುವ ಗುಂಪಿನಲ್ಲಿ ಸದಸ್ಯರ ಪಾತ್ರವು ಅತ್ಯಂತ ಪ್ರಮುಖವಾಗಿದೆ. ಪ್ರತಿ ಸದಸ್ಯನೂ ತನ್ನದೇ ಆದ ಕರ್ತವ್ಯಗಳನ್ನು ಸಮರ್ಪಕವಾಗಿ ಪಾಲಿಸಿದಾಗ ಮಾತ್ರ ಸಂಘಟನೆಯ ಕಾರ್ಯಕ್ಷಮತೆಯು ಉತ್ತುಂಗವನ್ನು ತಲುಪುತ್ತದೆ.
ಸಂಘಟನೆಯ ಪ್ರತಿ ಸದಸ್ಯನು "ಸೇವೆಯ ಮೂಲಕ ಶ್ರೇಷ್ಠತೆಯ" ಸಿದ್ಧಾಂತವನ್ನು ಅನುಸರಿಸಿದಾಗ ಮಾತ್ರ, ಮಾನವೀಯತೆ, ಸೇವಾ ಮನೋಭಾವ, ಮತ್ತು ಸಮಾನ ಮನೋಭಾವವನ್ನು ಸಮರ್ಥಕವಾಗಿ ಜೀವನದಲ್ಲಿ ಅಳವಡಿಸಬಹುದು. ಇಂತಹ ಸದಸ್ಯರ ಪಾತ್ರವೇ ಸಂಘಟನೆಯನ್ನು ಶಕ್ತಿಯುತವಾಗಿ ಮುನ್ನಡೆಯಿಸಲು ನೆರವಾಗುತ್ತದೆ. "ತನು-ಮನ-ಧನ" ಸಮರ್ಪಣೆಯಿಂದ ತಮ್ಮ ಸ್ಥಾನಕ್ಕೆ ನ್ಯಾಯವನ್ನು ನೀಡುವ ಸದಸ್ಯರು ಮಾತ್ರ ಸಂಘಟನೆಯ ದೀರ್ಘಕಾಲೀನ ಯಶಸ್ಸಿಗೆ ಕಾರಣರಾಗುತ್ತಾರೆ.
ಪರಸ್ಪರ ಸಮೂಹವು 2022ರ ಆಗಸ್ಟ್ 15ರಂದು ಬಳ್ಳಾರಿ ಜಿಲ್ಲೆಯ ರಾಜಸಾಬ್ ಅವರ ಆಲ್ ಇನ್ ವನ್ ಯುಟ್ಯೂಬ್ ಚಾನೆಲ್ ಮುಖಾಂತರ ಲೋಕಾರ್ಪಣೆಗೊಂಡಿತು. ಈ ಗುಂಪು ಬಹುಮುಖ್ಯ ಉದ್ದೇಶಗಳೊಂದಿಗೆ ಸಿದ್ಧವಾಯಿತು: ಪರಸ್ಪರ ಸಹಾಯ, ಅಭಿವೃದ್ಧಿ, ಮತ್ತು ಸಮಾಜಮುಖಿ ಸೇವೆ. ಇದು ತನ್ನ ಆದರ್ಶಗಳನ್ನು ಮತ್ತು ಕಾರ್ಯತತ್ವಗಳನ್ನು ಹತ್ತಿರದಿಂದ ಅನುಸರಿಸುತ್ತಾ, ಹಲವು ಹಂತಗಳಲ್ಲಿ ಬೆಳವಣಿಗೆಯನ್ನು ಸಾಧಿಸಿದೆ.
ಪರಸ್ಪರ ಸಮೂಹವು 2022ರ ಆಗಸ್ಟ್ 15ರಂದು ಬಳ್ಳಾರಿ ಜಿಲ್ಲೆಯ ರಾಜಸಾಬ್ ಅವರ ಆಲ್ ಇನ್ ವನ್ ಯುಟ್ಯೂಬ್ ಚಾನೆಲ್ ಮುಖಾಂತರ ಲೋಕಾರ್ಪಣೆಗೊಂಡಿತು. ಈ ಗುಂಪು ಬಹುಮುಖ್ಯ ಉದ್ದೇಶಗಳೊಂದಿಗೆ ಸಿದ್ಧವಾಯಿತು: ಪರಸ್ಪರ ಸಹಾಯ, ಅಭಿವೃದ್ಧಿ, ಮತ್ತು ಸಮಾಜಮುಖಿ ಸೇವೆ. ಇದು ತನ್ನ ಆದರ್ಶಗಳನ್ನು ಮತ್ತು ಕಾರ್ಯತತ್ವಗಳನ್ನು ಹತ್ತಿರದಿಂದ ಅನುಸರಿಸುತ್ತಾ, ಹಲವು ಹಂತಗಳಲ್ಲಿ ಬೆಳವಣಿಗೆಯನ್ನು ಸಾಧಿಸಿದೆ.
“ತರಬೇತಿ ತರಬೇತಿಗೇ ಬೇಕಾದ ದಾರಿ, ಸಾಧನೆಗಳೇ ಸವಾಲು, ಬದಲಾವಣೆಯ ಬಾಗಿಲು ಪರಿಶ್ರಮವೇ ತರಬೇತಿಯ ಧರ್ಮಗುಟ್ಟು, ನಾವು ಬಿತ್ತಿದ ಬೀಜದ ಫಲವಿತ್ತ. "ಬದುಕು ಭವಿಷ್ಯ" ಎಂಬ ದೀಪಾಲೋಚನೆ, ಮುಂದಿನ ಹೆಜ್ಜೆಯೇ ಪರಸ್ಪರ ಭರವಸೆ ಜ್ಯೋತಿಯಾರ್ಚನೆ.”
ಒಂದು ನಿಸ್ವಾರ್ಥ ಸೇವಾ ಸಂಸ್ಥೆ. ಇಲ್ಲಿ ಜಾತಿ,ಧರ್ಮ,ಲಿಂಗ, ಭೇದವಿಲ್ಲದೆ ಎಲ್ಲರಿಗೂ ಸಮಾನ ಮತ್ತು ಮುಕ್ತ ಅವಕಾಶ ಕಲ್ಪಿಸುವ ಒಂದು ಮಹಾನ್ ವೇದಿಕೆ. ಪರಸ್ಪರದ ಮೂಲ ಉದ್ದೇಶ "ಅಕ್ಷರ-ಆಹಾರ-ಆರೋಗ್ಯ" ಎಂಬ ಮೂರು ಸಿದ್ಧಾಂತಗಳ ಜೊತೆ ಸರ್ವರನ್ನೂ ಆರ್ಥಿಕ ಸಬಲೀಕರಣದೆಡೆಗೆ ಕೊಂಡೊಯ್ಯುವುದು. ಅಭಿಜ್ಞಾನ, ಅರಿವು, ಗುರುತು, ಜ್ಞಾನ, ತಿಳಿವಳಿಕೆ, ಪ್ರಜ್ಞೆ, ಬುದ್ಧಿ, ಸಂವೇದನೆ. ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲ ಹೊಂದಿರುವ ವ್ಯಕ್ತಿ ಸತತ ಪರಿಶ್ರಮ ಮತ್ತು ದೃಢಸಂಕಲ್ಪ ಎಂಬ ಇವೆರಡು ಬಾಣಗಳನ್ನು ತನ್ನ ಬತ್ತಳಿಕೆಯಲ್ಲಿ ಯಾವಾಗಲೂ ಇಟ್ಟುಕೊಂಡಿರಬೇಕಾಗುತ್ತದೆ. ಅದಾವ ಕಾಲದಲ್ಲಿ ಅವುಗಳ ಪ್ರಯೋಗ ಒದಗಿಬರುತ್ತದೆಯೋ ಗೊತ್ತಾಗುವುದಿಲ್ಲ! ಅನೇಕ ಸಾಧಕರ ಜೀವನವನ್ನು ಓದುವುದರಿಂದ ಸ್ಪೂರ್ತಿ ದೊರೆಯುತ್ತದೆ. ಮನಸ್ಸು ಯಾವುದನ್ನು ಹೆಚ್ಚೆಚ್ಚು ಯೋಚಿಸುವುದೋ? ಓದುವುದೋ? ವಿಮರ್ಷಿಸುವುದೋ? ಅದರ ಕಡೆ ಅದು ತುಂಬಾ ಫೋಕಸ್ ಆಗುತ್ತದೆ. ಇದು ಮನಸ್ಸಿನ ವ ಮನುಷ್ಯನ ಸಹಜ ಗುಣ ಹಾಗೂ ಯಶಸ್ಸಿನ ರಹಸ್ಯವೂ ಹೌದು! ಯಶಸ್ಸಿಗೆ ಯಾವುದೇ ನಿರ್ದಿಷ್ಟ ಅಂಕೆಯ ಮೆಟ್ಟಿಲುಗಳಿಲ್ಲ. ಯಶಸ್ಸಿಗೆ ಶಾರ್ಟಕಟ್, ಕಳ್ಳದಾರಿ ಅದು ಇದು ಎನ್ನುವುದು ಏನಿಲ್ಲ. ಅದೇನಿದ್ದರೂ ಮೂರ್ಖರು ಸೃಷ್ಟಿಸಿಕೊಂಡ ಭ್ರಮೆ. ಒಂದು ವೇಳೆ ಆ ಶಾರ್ಟಕಟ್ ನಲ್ಲಿ ದಕ್ಕಿಸಿಕೊಂಡ ಯಶಸ್ಸು ಬಹುಕಾಲ ಉಳಿಯುವುದಿಲ್ಲ. ಅದರ ವ್ಯಾಲಿಡಿಟಿ ತುಂಬಾ ಕಡಿಮೆ! ಹಾಗಾಗಿ ಸತತ ಪರಿಶ್ರಮ ಮತ್ತು ದೃಢಸಂಕಲ್ಪ ಇದರ ಜೊತೆ ಸಮಯಪಾಲನೆ, ಸತತ ಅಧ್ಯಯನ, ಏಕಾಗ್ರತೆ, ಹಾಗೂ ಬುದ್ಧಿವಂತಿಕೆ ಇವುಗಳನ್ನೆಲ್ಲ ಹದವಾದ ಪ್ರಮಾಣದಲ್ಲಿ ಮಿಶ್ರಣಮಾಡಿಕೊಂಡರೆ ಯಶಸ್ಸು ಅನ್ನುವ ಹಬ್ಬದೂಟವನ್ನು ಸವಿಯಬಹುದು! ಇವೆಲ್ಲವೂ ಒಂದೇ ಒಂದು ಪರಸ್ಪರ ಎಂಬ ಕೊಂಡಿಯೊಂದರಲ್ಲಿ ಬೆಸೆದಿದೆ ಎಂದರೆ ತಪ್ಪಾಗಲಾರದು ಇಂಥಹ ದೂರ ದೃಷ್ಟಿಕೋನದ ಯೋಚನೆ ಮತ್ತು ಯೋಜನೆಯ ಸಣ್ಣ ಪ್ರಯತ್ನದಲ್ಲಿ ದೊಡ್ಡ ಯಶಸ್ಸನ್ನು ಕಂಡು ಇಂದಿನ ಈ ಮಹಾ ವೇದಿಕೆಗೆ ಸತತ ಪರಿಶ್ರಮದ ಜೊತೆಗೆ ನಿರಂತರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವಲ್ಲಿ ತಮ್ಮನ್ನು ಸಂಪೂರ್ಣವಾಗಿ ಪರಸ್ಪರಕ್ಕಾಗಿ ತೊಡಗಿಸಿಕೊಂಡಿರುವ ಶ್ರೀಯುತ ಮಲ್ಟಿ ಮೀಡಿಯಾ ಚಂದ್ರು ಅಣ್ಣ ಅವರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾ ನಿಮ್ಮೆಲ್ಲರ ಸಕ್ರಿಯತೆ ಹಾಗೂ ಪಾಲ್ಗೊಳ್ಳುವಿಕೆ ಪರಸ್ಪರದೊಂದಿಗೆ ನಿರಂತರವಾಗಿ ಹೀಗೆ ಮುಂದುವರೆಯಲಿ ಎಂದು ಬಯಸುತ್ತೇವೆ.