ಮನಶಾಂತಿ

🌻ಎಂ ಶಾಂತಪ್ಪ ಬಳ್ಳಾರಿ 🌻

 

 

*ನಮ್ಮ ಜೀವನದ ನಿಜವಾದ ಯಶಸ್ಸು – ಮನಶಾಂತಿಯಲಿ ಇದೆ*

 

* ನಾವು ನಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು, ಅವರು ಸಂಸ್ಕೃತಿಯುಳ್ಳವರು, ವಿದ್ಯಾವಂತರು ಆಗಬೇಕು. ಅವರು ಸಮಾಜದಲ್ಲಿ ಗೌರವ ಪಡೆದವರಾಗಬೇಕು ಎಂಬುದು ಪ್ರತಿಯೊಬ್ಬ ಪೋಷಕರ ಆಸೆ.

 

* ಈ ಆಸೆ ನಮ್ಮ ಎಲ್ಲರಲ್ಲಿಯೂ ಇದೆ. ಮುಖಗಳು ಬೇರೆ ಇರಬಹುದು, ಜೀವನದ ಪರಿಸ್ಥಿತಿಗಳು ಬೇರೆ ಇರಬಹುದು—but ಭಾವನೆ ಒಂದೇ. ನಾನು, ನೀವು ಬೇರೆವಲ್ಲ. ನಾವೆಲ್ಲರೂ ಒಂದೇ, ಹೃದಯದಿಂದ ಕನೆಕ್ಟ್ ಆಗಿರುವವರು.

 

* ಒಂದು ಕಾರ್ಯಕ್ರಮದಲ್ಲಿ ನಾನು ಕೆಲವರು, ಬಹುಶಃ ಸಮಾಜದ ಶ್ರೀಮಂತರು, ಪ್ರಸಿದ್ಧರಾದವರು ಅವರನ್ನು ಭೇಟಿಯಾದೆ. ಅವರ ಜೀವನದ ಅನುಭವವನ್ನೂ ಕೇಳಿದೆ. ಅವರು ನನಗೆ ಹೇಳಿದ ಮಾತು ಹೀಗೆ ಇತ್ತು:  "ಯಶಸ್ಸು ಎಂದರೆ ದುಡ್ಡೂ ಅಲ್ಲ, ಕೀರ್ತಿಯೂ ಅಲ್ಲ – ಅದು ಮನಶಾಂತಿ." ನೆಮ್ಮದಿ, ತೃಪ್ತಿ – ಇದು ಎಲ್ಲಕ್ಕಿಂತ ದೊಡ್ಡ ಯಶಸ್ಸು.

 

* ಅದಕ್ಕಾಗಿ ಏನು ಬೇಕು? ಯೋಚನೆ, ಮಾತು ಮತ್ತು ವರ್ತನೆ – ಈ ಮೂರೂ ಒಂದೇ ರೀತಿಯವಾಗಬೇಕು. ತಲೆಯಲ್ಲೊಂದು, ಬಾಯಲ್ಲಿ ಮತ್ತೊಂದು, ಕೈಯಲ್ಲಿ ಇನ್ನೊಂದು ಮಾಡಿದರೆ ಸೋಲುತ್ತದೆ. ನೀವು ಯೋಚಿಸುವಂತೆಯೇ ಮಾತನಾಡಿದರೆ, ಮತ್ತು ಮಾತನಾಡುವಂತೆಯೇ ವರ್ತಿಸಿದರೆ ಮಾತ್ರ ನಿಜವಾದ ನೆಮ್ಮದಿ ಸಿಕ್ಕೀತು. ನಾನು ಆ ಹಂತದಲ್ಲಿ ತೃಪ್ತಿಯಾಗಿದ್ದೇನೆ.

 

* ಜೀವನದಲ್ಲಿ ಎಮೋಷನಲ್ ಬ್ಯಾಲೆನ್ಸ್ ಬಹುಮುಖ್ಯ. ರೇಗುವುದು, ಕೋಪಗೊಳ್ಳುವುದು, ತಕ್ಷಣ ಪ್ರತಿಕ್ರಿಯಿಸುವುದು – ಇವು ನಿಮ್ಮ ಶಾಂತಿಯನ್ನು ಕಿತ್ತುಕೊಳ್ಳುತ್ತವೆ. ಶ್ರೀಮಂತನಾದಾಗ ಉಬ್ಬುವುದು, ಬಡವಾದಾಗ ಕುಗ್ಗುವುದು – ಇವು ನಮ್ಮ ಮನಸ್ಸಿಗೆ ಸ್ಥಿರತೆಯ ಕೊರತೆ. ಎಲ್ಲವನ್ನೂ ಸಮಭಾವದಿಂದ ಸ್ವೀಕರಿಸಬೇಕು. ಅದರಲ್ಲೇ ಶಕ್ತಿ ಇದೆ.

 

* ಜೀವನವು ಪ್ರತಿಯೊಮ್ಮೆ ಎರಡು ದಾರಿಗಳನ್ನು ನಿಮ್ಮ ಮುಂದೆ ಇಡುತ್ತದೆ: ಪ್ರೀತಿಯ ದಾರಿ ಮತ್ತು ದ್ವೇಷದ ದಾರಿ. ನಾವು ಯಾವತ್ತೂ ಪ್ರೀತಿಯ ದಾರಿಯನ್ನೇ ಆರಿಸಬೇಕು. ನೀವು ಅಹಂನಿಂದ ದೂರವಾಗಿರಿ. ಪ್ರೀತಿ ಹಂಚಿಕೊಳ್ಳಿ. ಅಷ್ಟು ಜಾಸ್ತಿ ನಿಮ್ಮ ಜೀವನ ಶ್ರೇಷ್ಠವಾಗುತ್ತದೆ.

 

ನಿಮ್ಮ ಯೋಚನೆಗಳೇ ನೀವು.

ಚೆನ್ನಾಗಿ ಯೋಚಿಸಿ. ಹಿತವಾಗಿ ಯೋಚಿಸಿ. ಪಾಸಿಟಿವ್ ಆಗಿ ಯೋಚಿಸಿ.

ಆ ಯೋಚನೆಗಳು ನಿಮ್ಮ ಜೀವನವನ್ನೇ ಪಾಸಿಟಿವ್ ಆಗಿ ರೂಪಿಸುತ್ತವೆ.

 

*ಪರಸ್ಪರ ನಿರಂತರ*